ಕೆ.ವಿ.ಜಿ.ಪಿ. ನಿವೃತ್ತ ಪ್ರಾಂಶುಪಾಲರಾದ ಜಯಪ್ರಕಾಶ್ ಕಲ್ಲುಗದ್ದೆಯವರಿಗೆ ಸನ್ಮಾನ

0

ಸುಳ್ಯದ ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ಸುಮಾರು 26 ವರ್ಷಗಳಿಂದ ಉಪಾಧ್ಯಕ್ಷರಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ಜ. 31ರಂದು ನಿವೃತ್ತರಾದ ಜಯಪ್ರಕಾಶ್ ಕಲ್ಲುಗದ್ದೆಯವರಿಗೆ ಎನ್.ಎಸ್.ಎಸ್‌ ಸೇವಾ ಸಂಗಮ ಟ್ರಸ್ಟ್ ರಿ, ಸುಳ್ಯ,
ಕಾನತ್ತಿಲ ದೆವಮ್ಮ ಕಾಂಪ್ಲೆಕ್ಸ್ ನ ವಾಣಿಜ್ಯ ಉದ್ಯಮಿಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಇದೇ ಸಂದರ್ಭದಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸತ್ಯನಾರಾಯಣ ಪ್ರಸಾದ್ ಮತ್ತು ಮೆಕಾನಿಕಲ್ ವಿಭಾಗದಲ್ಲಿ ಬೋದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಚಂದ್ರಶೇಖರ ಎಂ.ಕೆಯವರನ್ನೂ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ವಿ.ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲರಾದ ಎನ್.ಆರ್ ಗಣೇಶ್ ವಹಿಸಿದ್ದರು. ಅಥಿತಿಗಳ ಪರಿಚಯವನ್ನು ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ಗೌಡ ಬೆಳ್ಳೂರು ನೆರೆವೆರಿಸಿದರು. ಹೇಮನಾಥ್ ಜಯನಗರ ಸ್ವಾಗತಿಸಿ, ರಕ್ಷಿತ್ ಬೊಳ್ಳೂರು ವಂದಿಸಿದರು.


ಸುಜಿತ್ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮನಮೋಹನ್ ಪುತ್ತಿಲ, ಮನಮೋಹನ್ ಅರಂಬೂರು, ಉಷಾ ಮುಳ್ಯ, ಸುನಿಲ್ ಪಾವಲಿಕಜೆ, ಚಿದಾನಂದ ಬೆಳ್ಳಿಪಾಡಿ, ಸೌಜನ್ಯ ಕುತ್ಯಾಳ, ಸಂದೀಪ್ ನಾಯಕ್, ಪುನಿತ್ ಪೂಜಾರಿಗದ್ದೆ, ಪ್ರಶಾಂತ್ ಪೆರಾಲ್, ಗೌರವ್, ಪವೀನ, ಉದಯ್, ಹರ್ಷಿತ್, ಅನಿಲ್, ಕಿಶೋರ್, ಅನೀಶ್ ಮತ್ತಿತರರು ಉಪಸ್ಥಿತರಿದ್ದರು.