ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಂದ ತುರ್ತು ಚಿಕಿತ್ಸೆಗಾಗಿ ಸಹಾಯಧನ

0

ಬಾಳುಗೋಡು ಗ್ರಾಮದ ಶ್ರೀ ಶಿರಾಡಿ ಹಾಗೂ ಸಪರಿವಾರ ಗ್ರಾಮ ದೈವಗಳ ಪರಿಚಾರಕರಾಗಿ ಸುದೀರ್ಘ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ 85 ವರ್ಷ ಪ್ರಾಯದ ಹಿರಿಯರಾದ
ಹೊನ್ನಪ್ಪ ಗೌಡ ಕುಡುಮುಂಡೂರುರವರು ಅಲ್ಪ ಕಾಲದ ಅನಾರೋಗ್ಯಕ್ಕೆ ತುತ್ತಾಗಿ ಆರ್ಥಿಕ ಸಂಕಷ್ಟಕ್ಕಿಡಾ ಗಿರುವುದರಿಂದ ಇವರ ಚಿಕಿತ್ಸೆಗಾಗಿ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟ್ (ರಿ ) ನ ಮುಖಾಂತರ 35,500 ರೂಪಾಯಿಗಳ ಆರ್ಥಿಕ ನೆರವನ್ನು ನೀಡಿದರು.


ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟಿನ ಅಧ್ಯಕ್ಷರಾದ ಡಾ. ಪುರುಷೋತ್ತಮ ಕಟ್ಟೆಮನೆ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ
ಡಾ.ಸೋಮಶೇಖರ ಕಟ್ಟೆಮನೆ ಯವರು ಹೊನ್ನಪ್ಪ ಗೌಡರನ್ನು ಕೆವಿಜಿ ಆಸ್ಪತ್ರೆಯಲ್ಲಿ ಭೇಟಿಯಾಗಿ ಕುಟುಂಬಸ್ಥರ ಪರವಾಗಿ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರುಗಳಾದ ಯತೀಶ ಕೆ.ಎನ್. ಕಟ್ಟೆಮನೆ, ಡಾ. ಹರ್ಷಿತ ಪುರುಷೋತ್ತಮ ಮತ್ತು ಮಾ.ಚಿರಾಯು ಕೆ.ಪಿ. ಉಪಸ್ಥಿತರಿದ್ದರು.