ಕುಲ್ಕುಂದ : ಗಣೇಶೋತ್ಸವ ಸಮಿತಿ ವತಿಯಿಂದ ಸಹಾಯಧನ ಹಸ್ತಾಂತರ

0

ಯೇನೆಕಲ್ಲಿ ನ ಪರಮಲೆಯ ಲಕ್ಷ್ಮಣರವರ ಮಗಳಾಗಿದ್ದು ಕ್ಯಾನ್ಸರ್ ರೋಗಕ್ಕೆ ತುತ್ತಾದ ವಂಶಿ ಎಂಬ ಕಂದಮ್ಮನಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಲ್ಕುಂದ ಇದರ ವತಿಯಿಂದ ಮೇ.5 ರಂದು ₹30,020 ಸಹಾಯಧನ ನೀಡಲಾಯಿತು.

ಗಣೇಶೋತ್ಸವ ಸಮಿತಿಯವರು ಕುಲ್ಕುಂದ ದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಹಣ ಸಂಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.