ಹಳೆಗೇಟು ಬಳಿ ಕಾರು- ಬೈಕ್ ಅಪಘಾತ: ಬೈಕ್ ಸವಾರ ದಂಪತಿಗಳಿಗೆ ಗಾಯ

0

ಗಾಯಾಳುಗಳ ಚಿಕಿತ್ಸೆಗೆ ಸ್ಪಂದಿಸದ ಕಾರು ಚಾಲಕ : ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು

ಸುಳ್ಯ ಹಳೆಗೇಟಿನ ಸಮೀಪ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ದಂಪತಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ಫೆ ೨೪ರಂದು ಸಂಭವಿಸಿದೆ.
ಪೇರಾಲು ನಿವಾಸಿ ಮಹೇಶ್ ಎಂಬುವವರು ತಮ್ಮ ಪತ್ನಿ ಇಂದಿರಾ ರವರನ್ನು ತಮ್ಮ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಫೆ ೨೪ ರಂದು ಮಧ್ಯಾಹ್ನ ಸುಳ್ಯದಿಂದ ತಮ್ಮ ಮನೆ ಪೇರಾಲು ಕಡೆಗೆ ಹೋಗುತ್ತಿದ್ದ ಸಂದರ್ಭ ಹಳೆಗೇಟು ತಿರುಮಲ ಹೋಂಡಾ ಶೋ ರೂಂ ಬಳಿ ಪುತ್ತೂರು ಕಡೆಯಿಂದ ವೇಗವಾಗಿ ಬಂದ ಕೆ ಎಲ್ ೧೨ ಕೆ ೪೦೧೬ ನೊಂದಾವಣಿ ಸಂಖ್ಯೆಯ ಕ್ರೇಟಾ ಕಾರು ಇವರ ಬೈಕಿಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಬೈಕಿನಲ್ಲಿದ್ದ ಪತಿ-ಪತ್ನಿ ಇಬ್ಬರೂ ರಸ್ತೆಗೆ ಬಿದ್ದು ಇಬ್ಬರಿಗೂ ಗಾಯ ಸಂಭವಿಸಿದೆ. ಈ ವೇಳೆ ಸ್ಥಳೀಯ ಆಟೋ ಚಾಲಕರು ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಅಪಘಾತ ನಡೆದು ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಕಾರಿನ ಚಾಲಕರು ಜೊತೆಯಲ್ಲಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿ, ಬಳಿಕ ಯಾವುದೇ ಸ್ಪಂದನೆ ನೀಡದೇ ಇರುವ ಹಿನ್ನೆಲೆಯಲ್ಲಿ ಕಾರು ಚಾಲಕ ಕೇರಳ ವಯನಾಡು ಮೂಲದ ಸುರೇಂದ್ರ ಹೆಗಡೆ ಎಂಬವರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಹೇಶ್ ರವರು ದೂರು ನೀಡಿದ್ದಾರೆ.