ಎಣ್ಮೂರು ಗರಡಿಯಲ್ಲಿ ನೇಮೋತ್ಸವದ ಪ್ರಯುಕ್ತ ಶ್ರಮದಾನ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಆದಿ ಬೈದರುಗಳ ನೇಮೋತ್ಸವ ಮಾ.೨೩ರಂದು ನಡೆಯಲಿದ್ದು, ಈ ಪ್ರಯುಕ್ತ ಮಾ.೩ರಂದು ಪ್ರಥಮ ಹಂತದ ಶ್ರಮದಾನ ನಡೆಯಿತು.

ಗರಡಿಯ ಸುತ್ತಮುತ್ತ ಸ್ವಚ್ಛತೆ ನಡೆಸಿ, ಸುಣ್ಣಗಳನ್ನು ಬಳಿಯಲಾಯಿತು.

ಗರಡಿಯ ಅನುವಂಶಿಕ ಆಡಳ್ತೆದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಎನ್.ಜಿ. ಲೋಕನಾಥ ರೈ, ಎಡಮಂಗಲ ಪಂ.ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ಸುಜಿತ್ ರೈ ಪಟ್ಟೆ, ವೇಣುಗೋಪಾಲ ರೈ ಕಲ್ಲೇರಿ, ಶ್ರೀಧರ ಕಲ್ಲೇರಿ, ಸ್ಥಳೀಯ ಭಕ್ತಾಧಿಗಳು, ಧ.ಗ್ರಾ.ಅ,ಯೋಜನೆ ಎಣ್ಮೂರು ಅಥ್ಯಕ್ಷ ಪುಟ್ಟಣ್ಣ ಕೋಡ್ಲೆ, ಸೇವಾ ಪ್ರತಿನಿಧಿ ವಿಶಾಲಾಕ್ಷಿ ಡಿ, ಸದಸ್ಯರು ಉಪಸ್ಥಿತರಿದ್ದರು.