ನಾಳೆ ಸುಳ್ಯದಲ್ಲಿ ವನಿತಾ‌ ಸಂಗಮ ಕಾರ್ಯಕ್ರಮ

0

ಸುಳ್ಯದ ವಿವೇಕ ಜಾಗ್ರತ ಬಳಗ ಆಯೋಜನೆ

ಡಿವೈನ್ ಪಾಕ್೯ ಟ್ರಸ್ಟ್ ಸಾಲಿಗ್ರಾಮ ಇದರ ಅಂಗಸಂಸ್ಥೆ ವಿವೇಕ ಜಾಗ್ರತ ಬಳಗ ಸುಳ್ಯ ಇದರ ವತಿಯಿಂದ ವನಿತಾ ಸಂಗಮ ಕಾರ್ಯಕ್ರಮ ವು ನಾಳೆ(ಮಾ.8) ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಮನೆಯನ್ನೇ ಮಂತ್ರಾಲಯವಾಗಿಸುವ ವನಿತ ಸಂಗಮ ಎಂಬ ದಿವ್ಯ ಕಾರ್ಯಕ್ರಮ ಇದಾಗಿದ್ದು, ಮಂಗಳೂರಿನ ಶ್ರೀಮತಿ ಪ್ರೇಮ ಪ್ರಭಾಕರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ವಿಜಯಲಕ್ಷ್ಮಿ ನಾಯಕ್ ರವರು ಆರೋಗ್ಯ ಮಾಹಿತಿ ನೀಡಲಿದ್ದಾರೆ.