ಜನರನ್ನು ಬೆಂಬಲಿಸುವ ಸರಕಾರಕ್ಕೆ ಜನರೂ ಬೆಂಬಲವಾಗಿ ನಿಲ್ಲಬೇಕು

0

ಪಂಚ ಗ್ಯಾರಂಟಿಗಳಿಂದ ಸ್ವಾವಲಂಬಿ ಬದುಕು

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ

ಭಾಷಣಗಳಿಂದ ಬದುಕು ಬದಲಾಗುವುದಿಲ್ಲ. ಅದಕ್ಕೆ ಸಮರ್ಪಕವಾದ ಯೋಜನೆಗಳು ಬೇಕು. ಅದನ್ನು ನಮ್ಮ ಸರಕಾರ ಮಾಡಿ ಜನರ ಬೆಂಬಲಕ್ಕೆ ನಿಂತಿದೆ. ಜನರನ್ನು ಬೆಂಬಲಿಸುವ ಸರಕಾರವನ್ನು ಜನರೂ ಬೆಂಬಲಿಸಬೇಕು ಎಂದು ರಾಜ್ಯ ಗೇರು ಕೃಷಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.

ಗ್ಯಾರಂಟಿ ಸಮಾವೇಶದಲ್ಲಿ ಅತಿಥಿಯಾಗಿ ಮಾತನಾಡಿದ ಅವರು ಇಂಥಹ ಯೋಜನೆಗಳಿಗಾಗಿ ಸರಕಾರ ಯಾಕೆ ಹಣ ಖರ್ಚು ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಈ ಯೋಜನೆಗಳಿಂದ ಪ್ರತಿ ಕುಟುಂಬವೂ ಸ್ವಾವಲಂಬಿ ಬದುಕು ನಡೆಸುತ್ತಿದೆ ಎಂದು ಹೇಳಿದರು.