ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗದ ವತಿಯಿಂದ ಬೃಹತ್ ಸ್ವ್ಛಚತಾ ಕಾರ್ಯಕ್ರಮವು ಮಾ.10 ರಂದು ನಡೆಯಿತು.
ರಸ್ತೆ ಬದಿ ಕಸ,ಪ್ಲಾಸ್ಟಿಕ್ ಇನ್ನಿತರ ಕಸಗಳನ್ನು ಹೆಕ್ಕಿ ಪರಿಸರವನ್ನು ಶುಚಿ ಗೊಳಿಸಲಾಯಿತು.


ಬೆಂಗಳೂರಿನ ಉದ್ಯಮಿ ಹರೀಶ್ ರಾವ್ ಉದ್ದಂಪಾಡಿಯವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಘು ಉಪಹಾರ ನೀಡಿ ಸಹಕರಿಸಿದರು.
ಸ್ವಚ್ಛತೆಗೆ ಬೇಕಾದ ಪರಿಕರ ಮತ್ತು ಪಿಕಪ್ ವಾಹನವನ್ನು ಪಂಚಾಯತ್ ವತಿಯಿಂದ ಒದಗಿಸಿದರು.
ಗೆಳೆಯರ ಬಳಗದ ಎಲ್ಲಾ ಪದಾಧಿಕಾರಿಗಳು ಸದಸ್ಯರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.