ಹರಿಹರ ಪಲ್ಲತಡ್ಕ: ಸಚಿನ್ ಕ್ರೀಡಾ ಸಂಘದಿಂದ ಅಶಕ್ತ ಮಗುವಿನ ಚಿಕಿತ್ಸೆ ಗೆ ಸಹಾಯಧನ

0

ಬಾಳುಗೋಡು ಗ್ರಾಮದ ಕೊತ್ನಡ್ಕ ನಿವಾಸಿ ಪ್ರಸಾದ್ ಹಾಗು ಆಶಾಲತಾ ದಂಪತಿಯ 4 ವರ್ಷದ ದೀಕ್ಷನ್ ಎಂಬ ಮಗು ಹುಟ್ಟಿನಿಂದಲೆ ಕಾಲಿನ ನ್ಯೂನತೆ ಹೊಂದಿದ್ದು ನಡೆದಾಡಲು ಅಶಕ್ತನಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಮನಗಂಡ ಸಚಿನ್ ಕ್ರೀಡಾ ಸಂಘದಿಂದ ಮಗುವಿನ ಚಿಕಿತ್ಸೆಗಾಗಿ ಸಹಾಯಧನದ ಮಾ.10 ರಂದು ಚೆಕ್‌ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಸಾದ್ ಆಶಾಲತ ದಂಪತಿಗಳು ಹಾಗೂ ಸಂಘದ ಅಧ್ಯಕ್ಷ ಪ್ರದೀಪ್ ಕಜ್ಜೋಡಿ ಹಾಗು ಸದಸ್ಯರುಗಳು ಹಾಜರಿದ್ದರು.