p>

ಬೆಳ್ಳಾರೆಗೆ ಸುಸಜ್ಜಿತ ಕ್ರೀಡಾಂಗಣ – ಸಚಿವ ದಿನೇಶ್ ಗುಂಡೂರಾವ್ ಭರವಸೆ

0

ಬೆಳ್ಳಾರೆಯಲ್ಲಿ ಟೌನ್ ಬಾಯ್ಸ್ ಬೆಳ್ಳಾರೆ ಇದರ ವತಿಯಿಂದ ಜರುಗಿದ ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಲ್ಲಿ ಪಂದ್ಯಾಟ ಸಂಘಟಕರು ಸಾರ್ವಜನಿಕರಿಗೆ ಕ್ರಿಡಾಂಗಣ ಸಮಸ್ಯೆ ಇರುವುದನ್ನು ಗಮನಕ್ಕೆ ತಂದಾಗ ಸುಸಜ್ಜಿತ ಕ್ರೀಡಾಂಗಣ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ರಾದ ಶ್ರೀಮತಿ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಪಿ. ಸಿ. ಜಯರಾಂ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ, ಪೆರುವಾಜೆ ಪಂಚಾಯತ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಹಮೀದ್ ಬೆಳ್ಳಾರೆ, ಪಂದ್ಯಾಟ ಸಂಘಟಕರು, ಮತ್ತಿತರರು ಉಪಸ್ಥಿತರಿದ್ದರು