ಹರಿಹರ ಪಲ್ಲತ್ತಡ್ಕ : ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

0

ಬಡ ಕುಟುಂಬದ ನೂತನ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಹರಿಹರ ಪಲ್ಲತ್ತಡ್ಕದಲ್ಲಿ ಇಂದು ನಡೆಯಿತು.ಹರಿಹರ ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿಗಳಾದ ಶಿವರಾಮ ಹಾಗು ಆತನ ಸಹೋದರಿ ರತ್ನಾವತಿರವರು ಅಶಕ್ತರಾಗಿದ್ದು ಅವರು ವಾಸಿಸುವ ಮನೆ ಶಿಥಿಲಗೊಂಡು ವಾಸ್ತವ್ಯಕ್ಕೆ ಯೋಗ್ಯವಿಲ್ಲದೆ ಇರುವುದನ್ನು ಮನಗಂಡ ಸಚಿನ್ ಕ್ರೀಡಾ ಸಂಘ ಹಾಗು ಪ್ರಮುಖ ದಾನಿಗಳ ಸಹಾಕಾರದಿಂದ ನೂತನ ಮನೆ ನಿರ್ಮಿಸಲು ನಿರ್ಧರಿಸಿದ್ದು ನೂತನ ಮನೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.ಭೂಮಿ ಪೂಜೆಯ ಪೂಜಾ ವಿಧಿಗಳನ್ನು ಗ್ರಾ.ಪಂ ಸದಸ್ಯ ಗಿರೀಶ್ ಆಚಾರ್ಯ ನೆರವೇರಿಸಿದರು.ಈ ಸಂದರ್ಭ ಸಚಿನ್ ಕ್ರೀಡಾ ಸಂಘದ ಅಧ್ಯಕ್ಷ ಪ್ರದೀಪ್ ಕಜ್ಜೋಡಿ, ಹಾಗು ಸದಸ್ಯರು, ದಾನಿಗಳು ಉಪಸ್ಥಿತರಿದ್ದರು