ಬಂಟಮಲೆ ಅಕಾಡೆಮಿ ವತಿಯಿಂದ ಪತ್ರಿಕೋದ್ಯಮಿ ಕಲ್ಲೆ ಶಿವೋತ್ತಮ ರಾವ್‌ರವರಿಗೆ ಕುವೆಂಪು ಬಂಟಮಲೆ ಪ್ರಶಸ್ತಿ ಪ್ರದಾನ

0

ಕರ್ನಾಟಕ ಅಧ್ಯಯನ ಕೇಂದ್ರ ಹಾಗೂ ಗುತ್ತಿಗಾರು ಬಂಟಮಲೆ ಅಕಾಡೆಮಿ ಆಶ್ರಯದಲ್ಲಿ ಮಾ. ೯ರಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮಿ ಕಲ್ಲೆ ಶಿವೋತ್ತಮ ರಾವ್‌ರವರಿಗೆ ಬಂಟಮಲೆ ಪ್ರಶಸ್ತಿ ಪ್ರದಾನಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಪಾರ್ವತೀಶ ಬಿಳಿದಾಳೆ ಸಂಪಾದಿಸಿದ ಕಲ್ಲೆ ಶಿವೋತ್ತಮ ರಾವ್ ಜನಪ್ರಗತಿಯ ಪಂಜು ಕೃತಿಯನ್ನು ಚಿಂತಕ ಪ್ರೊ. ಪುರುಷೋತ್ತಮ ಬಿಳಿಮಲೆ ಬಿಡುಗಡೆಗೊಳಿಸಿ ಶುಭಹಾರೈಸಿದರು.ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ವಯೋಮಾನದ ಕಾರಣಕ್ಕೆ ಕಲ್ಲೆ ಶಿವೋತ್ತಮ ರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.ಅವರ ಪರವಾಗಿ ಪುತ್ರ ಅಜಿತ್ ಅಶುತೋಷ್ ಕಲ್ಲೆ ಮತ್ತು ಪುತ್ರಿ ಅಲ್ಕಾ ಕುಮಾರ್ ಅವರು ಶಿಕ್ಷಣ ತಜ್ಞ ಸುಕುಮಾರ ಗೌಡ ಅವರಿಂದ ಕುವೆಂಪು ಬಂಟಮಲೆ ಪ್ರಶಸ್ತಿ ಸ್ವೀಕರಿಸಿದರು. ಬಂಟಮಲೆ ಅಕಾಡೆಮಿ ಕಾರ್ಯದರ್ಶಿ ಎ.ಕೆ.ಹಿಮಕರ ಕಾರ್ಯಕ್ರಮ ನಿರೂಪಿಸಿದರು. ಕೃತಿ ಸಂಪಾದಕ ಪಾರ್ವತೀಶ ಬಿಳಿದಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.