ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥರವರಿಗೆ ಐವರ್ನಾಡು ಸಹಕಾರಿ ಸಂಘದಲ್ಲಿ ಸನ್ಮಾನ

0

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಪ್ರಥಮ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರಿಗೆ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಮಾ.22 ರಂದು ಸಹಕಾರಿ ಸಂಘದಲ್ಲಿ ನಡೆಯಿತು.


ಎಸ್.ಎನ್. ಮನ್ಮಥರವರನ್ನು ಶಾಲು ಹೊದಿಸಿ,ಫಲ,ಪುಷ್ಮ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮನ್ಮಥರವರು ಮಾತನಾಡಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುವ ಅವಕಾಶ ನನಗೆ ಸಿಕ್ಕಿದೆ.ಎಂ.ಎನ್.ರಾಜೇಂದ್ರ ಕುಮಾರ್ ರವರು ಈ ಬಾರಿ ನೀವು ನಿಲ್ಲಿ ಎನ್ನುವ ಮಾತನ್ನು ಹೇಳಿದ್ದರು.


ಪಕ್ಷ ಕೂಡ ನನಗೆ ಅವಕಾಶ ನೀಡಿತು.ಬಹಳಷ್ಡು ಜನ ಆಕಾಂಕ್ಷಿಗಳಿದ್ದರು.ಆದರೆ ಎಲ್ಲರೂ ನನಗೆ ಅವಕಾಶ ನೀಡಿದರು.ಇದರಿಂದ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು.ಸಹಕರಿಸಿದ ಬ್ಯಾಂಕಿನ ಆಡಳಿತ ಮಂಡಳಿಗೆ ಮತ್ತು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಡಿ.ಸಿ.ಸಿ.ಬ್ಯಾಂಕಿನ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ನಿರ್ದೇಶಕ ಸತೀಶ ಎಡಮಲೆ ಶುಭಹಾರೈಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿಕ್ರಂ ಪೈ,ನಿರ್ದೇಶಕರಾದ ಕುಸುಮಾಧರ ಎಂ.ಸಿ, ಮಹೇಶ್ ಜಬಳೆ, ಶ್ರೀಮತಿ ದೇವಕಿ ಸಿ.ಜಿ, ಶ್ರೀಮತಿ ಭವಾನಿ ಎಂ.ಸಿ,ಕೃಷ್ಣ ಬೆಳ್ಚಪ್ಪಾಡ ಪಿ, ಪುರಂದರ ಎಸ್, ವಾಸುದೇವ ಬಿ.ಕೆ,ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ,ಸ್ವಾಗತಿಸಿ,ವಂದಿಸಿದರು.