ಗೂನಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚಿಕಿತ್ಸೆಗೆ ಧನಸಹಾಯ

0

ದ.ಕ. ಸಂಪಾಜೆ ಗ್ರಾಮದ ಗೂನಡ್ಕ ಕಾರ್ಯ ಕ್ಷೇತ್ರದ ಸ್ಪೂರ್ತಿ ಸ್ವಸಹಾಯ ಸಂಘದ ಸದಸ್ಯೆ‌ ಹರಣಾಕ್ಷಿಯವರು ಅಸೌಖ್ಯದಿಂದಿದ್ದು, ಅವರ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜುರಾದ ರೂ 25000 ಮಂಜೂರಾತಿ ಪತ್ರವನ್ನು ಹರಿಣಾಕ್ಷಿಯವರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಪಾಜೆ ವಲಯ ಮೇಲ್ವಿಚಾರಕಿ ಜಯಶ್ರೀ, ಕಲ್ಲುಗುಂಡಿ ಒಕ್ಕೂಟದ ಉಪಾಧ್ಯಕ್ಷ ಯಶೋಧರ, ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಚಿದಾನಂದರವರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು