ಮಂಡೆಕೋಲು ಸಹಕಾರ ಸಂಘದ‌ ಪೇರಾಲು ಶಾಖೆಯ ಗೋದಾಮು ಕಟ್ಟಡಕ್ಕೆ ಡಿಸಿಸಿ‌ ಬ್ಯಾಂಕ್ ನಿಂದ ರೂ.5‌ಲಕ್ಷ‌ ಸಹಾಯಧನ

0

ಮಂಡೆಕೋಲು ಸಹಕಾರ ಸಂಘದ ಪೇರಾಲು ಶಾಖೆಯ ನೂತನ ಗೋದಾಮು ಕಟ್ಟಡ ಇತ್ತೀಚೆಗೆ ಉದ್ಘಾಟನೆ ಗೊಂಡಿದ್ದು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ರೂ 5.00 ಲಕ್ಷ ಸಹಾಯಧನ ನೀಡಿ ಸಹಕಾರ ನೀಡಿದೆ.

ಜಿಲ್ಲಾ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಾಯಾಧನ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪಿ ಜಿ, ನಿರ್ದೇಶಕರಾದ ಸುರೇಶ್ ಕಣೆಮರಡ್ಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ, ವಲಯ ಮೆಲ್ವಿಚಾರಕರಾದ ಬಾಲಕೃಷ್ಣ ಪುತ್ಯ ಸಂಘದ ಮಾಜಿ ಅಧ್ಯಕ್ಷರು ಶಿವಪ್ರಸಾದ್ ಉಗ್ರಾಣಿಮನೆ ಇದ್ದರು