ಕರ್ನಾಟಕ ಚಲನಚಿತ್ರೋತ್ಸವದಲ್ಲಿ ಗೌರಿತಾಳಿಗೆ ಪುನೀತ ಪ್ರಶಸ್ತಿ

0

ಯೋಗ ಪಟು ಗೌರಿತಾಳಿಗೆ ಪುನೀತ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಾ. 23ರಂದು ಧಾರವಾಡದ ಸುವರ್ಣ ಸಮುಚ್ಛಯ ಭವನ ರಂಗಾಯಣ ದಲ್ಲಿ ನಡೆಯಿತು.

ಕರ್ನಾಟಕ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ
ಪ್ರಶಸ್ತಿ ಪ್ರಧಾನ ಮಾಡಲಾಯಿತು.ಚಿತ್ರ ನಟಿ ಸುನಂದಾ ಕಲ್ಬುರ್ಗಿ , ಚಲನಚಿತ್ರ ನಟ ಹಾಗೂ ನಿರ್ಮಾಪಕರಾದ ಡಾ. ಕಲ್ಮೇಶ ಹಾವೇರಿ ಪೇಟ, ನಟ ಹಾಗೂ ನಿರ್ದೇಶಕರಾದ ತಮನ್ , ಚಿತ್ರ ನಿರ್ದೇಶಕ ಲೋಕೇಶ ವಿದ್ಯಾಧರ, ಚೇತನ್ ಫೌಂಡೇಶನ್ ಕರ್ನಾಟಕದ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ರವರ ಪುತ್ರಿ .ಇವಳು ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ರವರಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಪಡೆಯುತ್ತಿದ್ದಾಳೆ.