ಜೇಸಿಐ ಬೆಳ್ಳಾರೆ ವತಿಯಿಂದ ಬಿ.ಎಸ್.ಸರ್ದಾರ್ ಮುರುಳ್ಯರವರಿಗೆ ಶ್ರದ್ಧಾಂಜಲಿ

0

ಜೇಸಿಐ ಬೆಳ್ಳಾರೆ ,ಯುವ ಜೇಸಿ ವಿಭಾಗ ಬೆಳ್ಳಾರೆ ವತಿಯಿಂದ ಇತ್ತೀಚೆಗೆ ನಿಧನರಾದ ಬೆಳ್ಳಾರೆ ಜೇಸಿ ಸ್ಥಾಪಕಾಧ್ಯಕ್ಷ ಬಿ.ಎಸ್.ಸರ್ದಾರ್ ಮುರುಳ್ಯರವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ಬೆಳ್ಳಾರೆ ಜೇಸೀ ಭವನದಲ್ಲಿ ಮಾ.29 ರಂದು ನಡೆಯಿತು.


ಜೇಸಿ ಅಧ್ಯಕ್ಷ ಜಗದೀಶ ರೈ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರೂಪಿಸಿದರು.
ಜೇಸಿ ಸ್ಥಾಪಕ ಕಾರ್ಯದರ್ಶಿ ಕೃಷ್ಣಪ್ಪ ಮೂಲ್ಯರವರು ದೀಪ ಬೆಳಗಿಸಿ ಬಳಿಕ ಸರ್ದಾರ್ ಮುರುಳ್ಯ ರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆರ್.ಕೆ.ಬೆಳ್ಳಾರೆ, ವಾಸುದೇವ ನಡ್ಕ, ನಾರಾಯಣ ಭಟ್ ರವರು ಸರ್ದಾರ್ ರವರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.
ಶ್ರೀಮತಿ ರಾಜೀವಿ ಆರ್ .ರೈ ಚೇತನಾ ಮುರುಳ್ಯ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ದಿ.ಸರ್ದಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.