ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಸುಳ್ಯ ಮೊಗರ್ಪಣೆ ದರ್ಗಾ ಭೇಟಿ, ವಿಶೇಷ ಪ್ರಾರ್ಥನೆ

0


ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಸುಳ್ಯ ಮೊಗರ್ಪಣೆ ದರ್ಗಾಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಖತ್ ಅಲಿ ಸಖಾಫಿ ಪ್ರಾರ್ಥನೆ ನೆರವೇರಿಸಿ ಆಶೀರ್ವದಿಸಿದರು.

ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀಫುಡ್, ಸಮಿತಿಯ ಪದಾಧಿಕಾರಿಗಳಾದ ಉಸ್ಮಾನ್, ಹಾಜಿ ಉಮ್ಮರ್, ಸುಳ್ಯ ಬ್ಲಾಕ್ ಉಸ್ತುವಾರಿ ಎಸ್. ಸಂಶುದ್ದೀನ್ ಅರಂಬೂರು, ಮುಖಂಡರುಗಳಾದ ಹಾಜಿ ಮುಸ್ತಫಾ ಜನತಾ, ಹಾಜಿ ಪಿ.ಎಂ. ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.


ಡಾ. ಪದ್ಮರಾಜ್‌ರವರೊಂದಿಗೆ ಕಾಂಗ್ರೆಸ್ ಮುಖಂಡರುಗಳಾದ ಜಿ. ಕೃಷ್ಣಪ್ಪ, ಪಿ.ಸಿ.ಜಯರಾಮ್, ಪಿ.ಎಸ್.ಗಂಗಾಧರ್, ಕಿರಣ್ ಬುಡ್ಲೆಗುತ್ತು, ವಿಜಯಕುಮಾರ್ ಸೊರಕೆ, ಮಹಮ್ಮದ್ ಕುಂಞಿ ಗೂನಡ್ಕ, ಡಾ.ಜ್ಞಾನೇಶ್, ಶಾಹುಲ್ ಹಮೀದ್ ಕುತ್ತಮೊಟ್ಟೆ, ರಾಜು ಪಂಡಿತ್, ಸದಾನಂದ ಮಾವಜಿ, ಎನ್. ಜಯಪ್ರಕಾಶ್ ರೈ, ನಂದರಾಜ್ ಸಂಕೇಶ, ರಂಜಿತ್ ಮೇನಾಲ, ಶಾಫಿ ಕುತ್ತಮೊಟ್ಟೆ, ಶ್ರೀಹರಿ ಕುಕ್ಕುಡೇಲು, ಇಸ್ಮಾಯಿಲ್ ಪಡ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು.