ಯೇನೆಕಲ್ಲಿನಲ್ಲಿ ವಾರ್ಷಿಕ ಜಾತ್ರೋತ್ಸವ

0

ಬಚ್ಚನಾಯಕ ಸಪರಿವಾರ ದೈವಗಳ ನೇಮೋತ್ಸವ

ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ದೈವಸ್ಥಾನ ಯೇನೆಕಲ್ಲು ಇದರ ವಾರ್ಷಿಕ ಜಾತ್ರೋತ್ಸವವು ಮಾ. 24 ರಿಂದ ೨೪ರಂದು ಗೊನೆ ಕಡಿಯುವುದರೊಂದಿಗೆ ಆರಂಭಗೊಂಡಿದೆ.

ಮಾ. 31 ರಂದು ರಾತ್ರಿ ಭಂಡಾರ ಬಂದು ಉಡ್ಡೋತ್ತಾರು ಕುಮಾರ ದೈವಗಳ ನೇಮೋತ್ಸವ ನಡೆಯಿತು. ಏ. ೦೧ರಂದು ಬೆಳಿಗ್ಗೆ ಶ್ರೀ ಬಚ್ಚನಾಯಕ ದೈವದ ನೇಮೋತ್ಸವ ನಡೆಯಿತು. ನಂತರ ಕೋಟಿನಾಯಕ ದೈವದ ನೇಮೋತ್ಸವ ನಡೆಯಲಿದೆ.

ರಾತ್ರಿ ಪ್ರಧಾನಿ ವಗೈರೆ ನೇಮ, ಬಳಿಕ ಭಂಡಾರ ಹೊರಟು ಏ. 2ರಂದು ರಾತ್ರಿ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಏ. 20 ರಂದು ಮಧ್ಯಾಹ್ನ ಶ್ರೀ ದೇವರ ಪ್ರತಿಷ್ಠಾ ದಿವಸದ ಅಂಗವಾಗಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ ೭.೩೦ರಿಂದ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಗಂಧ ಪ್ರಸಾದ ಸ್ವೀಕರಿಸಿದರು.