ರಾಜ್ಯ ಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿಗೆ ಐವರ್ನಾಡಿನ ನವೀನ ಚಾತುಬಾಯಿ ಆಯ್ಕೆ

0

ಬೆಂಗಳೂರಿನ ಹೆಬ್ಬಾಳ ಅಲುಮ್ನಿ ಅಸೋಸಿಯೇಷನ್ ವತಿಯಿಂದ 2023-24 ನೇ ಸಾಲಿಗೆ ನೀಡುವ ಡಾ. ಜಿ.ಕೆ .
ವೀರೇಶ್ ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿಗೆ (ಕರಾವಳಿ/ಮಲೆನಾಡು ವಿಭಾಗ).
ಐವರ್ನಾಡಿನ ಕೃಷಿಕ ನವೀನ ಚಾತುಬಾಯಿಯವರು ಆಯ್ಕೆಯಾಗಿದ್ದಾರೆ.


ಈ ಪ್ರಶಸ್ತಿ ಪ್ರಧಾನ ಸಮಾರಂಭವು ಎ.4 ರಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು ಅಂದು ನವೀನ ಚಾತುಬಾಯಿಯವರು ಪ್ರಶಸ್ತಿ ಸ್ವೀಕರಿಸಲಿರುವರು.