ಕಳಂಜದಲ್ಲಿ ಕಳಂಜ ಹಬ್ಬ 2024 ಅದ್ವೈತ್ ಮಕ್ಕಳ ಬೇಸಿಗೆ ಶಿಬಿರ ಪ್ರಣನ್ಯ ಕುದ್ಪಾಜೆ ರವರಿಂದ ಉದ್ಘಾಟನೆ

0

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ಹಾಗೂ ಡಾನ್ಸ್ ಅಂಡ್ ಬೀಟ್ಸ್ ಬೆಳ್ಳಾರೆ ಸಹಯೋಗದಲ್ಲಿ ಮಕ್ಕಳ ಹಬ್ಬ ಕಳಂಜ 2024 ಅದ್ವೈತ್ ಮಕ್ಕಳ ಬೇಸಿಗೆ ಶಿಬಿರ ಏ.13 ರಂದು ವಿಷ್ಣು ನಗರದಲ್ಲಿ ಉದ್ಘಾಟನೆಗೊಂಡಿತು.

ಮನೋ ವೈದ್ಯಕೀಯ ಆಪ್ತ ಸಮಾಲೋಚಕರಾದ ಶ್ರೀಮತಿ ಮೀನಾಕುಮಾರಿ ಕೆ ಸಭಾ ಅಧ್ಯಕ್ಷತೆಯನ್ನು ವಹಿಸಿದ್ದರು.


ಶಿಬಿರವನ್ನು ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ರನ್ನರ್ ಪ್ರಶಸ್ತಿ ಪಡೆದ ಬೇಬಿ ಪ್ರಣನ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.


ವಿಷ್ಣು ಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಕರುಣಾಕರ ರೈ, ಬೆಳ್ಳಾರೆ ರೋಟರಿ ಕ್ಲಬ್ ಟೌನ್ ಬೆಳ್ಳಾರೆ ಇದರ ಅಧ್ಯಕ್ಷ ಪಿ.ಕೆ ಶಶಿಧರ್, ವಿಷ್ಣು ಸ್ಪೋರ್ಟ್ಸ್ ಕ್ಲಬ್ ಕಳಂಜ ಇದರ ಅಧ್ಯಕ್ಷ ರವಿಪ್ರಸಾದ್ ರೈ, ಯುವಕ ಮಂಡಲ ಕಳಂಜ ಇದರ ಅಧ್ಯಕ್ಷ ಶಿವರಾಮ ಕಜೆಮೂಲೆ, ಸಂಕಲ್ಪ ಫ್ರೆಂಡ್ಸ್ ಕಳಂಜ ಇದರ ಗಗನ್ ನಾಲ್ಗುತ್ತು, ಶಿಬಿರದ ಸಂಯೋಜಕರುಗಳಾದ ಸತೀಶ್ ಕಳಂಜ, ಜೀವನ್ ತಡಗಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಯರಾಮ ಉಮಿಕ್ಕಳ ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಜೀವನ್ ತಡಗಜೆ ಧನ್ಯವಾದ ಅರ್ಪಿಸಿದರು. ಪ್ರದೀಪ್ ಕುಮಾರ್ ಪನ್ನೆ ಕಾರ್ಯ ಕ್ರಮ ನಿರೂಪಿಸಿದರು.