ಎ.15 : ನಾಗಪಟ್ಟಣದಲ್ಲಿ ಶ್ರೀ ಭಗವತಿ ಆಯಿಲ್ ಮತ್ತು ಫ್ಲೋರ್ ಮಿಲ್ ಶುಭಾರಂಭ

0

ಆಲೆಟ್ಟಿ ಗ್ರಾಮದ ನಾಗಪಟ್ಟಣದಲ್ಲಿರುವ ಜತ್ತಪ್ಪ ಗೌಡ ಕಾಂಪ್ಲೆಕ್ಸ್ ನಲ್ಲಿ ಗೋಪಾಲಕೃಷ್ಣ ಮೊರಂಗಲ್ಲು ರವರ ಮಾಲಕತ್ವದ ಶ್ರೀ ಭಗವತಿ ಆಯಿಲ್ ಮತ್ತು ಫ್ಲೋರ್ ಮಿಲ್ ಇದರ ಶುಭಾರಂಭವಾಗಲಿರುವುದು.


ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಸ್ಥಾನಿಕರು ದೀಪ ಪ್ರಜ್ವಲಿಸಲಿರುವರು.


ಈ ಸಂದರ್ಭದಲ್ಲಿ ಮೊರಂಗಲ್ಲು ಧೂಮಾವತಿ ದೈವಸ್ಥಾನದ ಮೊಕ್ತೇಸರ ಗುರುಪ್ರಸಾದ್ ರೈ ಮೊರಂಗಲ್ಲು ರವರು ನೂತನ ” ಕೃಷ್ಣ” ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ಹಲವಾರು ಗಣ್ಯ ಅತಿಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.


ಶುದ್ಧ ಎಳ್ಳೆಣ್ಣೆ ಹಾಗೂ ಕೃಷಿಕರಿಂದ ಖರೀದಿಸಿದ ಶುದ್ಧ ಕೊಬ್ಬರಿಯಿಂದ ಪರಿಶುದ್ಧ ತೆಂಗಿನ ಎಣ್ಣೆ ತಯಾರಿಸಿಕೊಡಲಾಗುವುದು .ಅಲ್ಲದೆ ಎಲ್ಲಾ ತರದ ಧವಸ ಧಾನ್ಯಗಳನ್ನು ಕ್ಲಪ್ತ ಸಮಯದಲ್ಲಿ ಹುಡಿ ಮಾಡಿ ಕೊಡಲಾಗುವುದು ಎಂದುಮಾಲಕರು ತಿಳಿಸಿರುತ್ತಾರೆ.