ಅರಂತೋಡು ಕಾಂಗ್ರೇಸ್ ಚುನಾವಣಾ ಪೂರ್ವ ಭಾವಿ ಸಭೆ

0

ಸುಳ್ಯ ವಿಧಾನ ಸಭಾಕ್ಷೇತ್ರದ ಅರಂತೋಡು ಗ್ರಾಮ ಸಮಿತಿಯ ಲೋಕಸಭೆಯ ಚುನಾವಣಾ ಪೂರ್ವ ಭಾವಿ ಸಭೆಯು ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ ಜಯರಾಮ ರವರ ಅಧ್ಯಕ್ಷತೆಯಲ್ಲಿ ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ಎ.12 ರಂದು ನಡೆಯಿತು.


ಸಭೆಯಲ್ಲಿ ಸುಳ್ಯ ವಿಧಾನ ಸಭಾಕ್ಷೇತ್ರದ ಚುನಾವಣಾ ವೀಕ್ಷಕರಾದ ಜಯಪ್ರಕಾಶ್ ರೈ , ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್, ಸುಳ್ಯ ವಿಧಾನ ಸಭಾಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಕೃಷ್ಣಪ್ಪ, ಜಿಲ್ಲಾಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಶೊಕ್ ಎಡಮಲೆ, ನ್ಯಾಯವಾದಿ ದಿನೇಶ್ ಅಬೆಕಲ್ಲು ಮಾತನಾಡಿ ರಾಜ್ಯ ಸರಕಾರದ ಸಾಧನೆಯನ್ನು ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಮತದಾರರ ಮನಗೆಲ್ಲಲು ಒಟ್ಟಾಗಿ ದುಡಿಯ ಬೇಕೆಂದರು.

ಸುಳ್ಯ ಬ್ಲಾಕ್ ಪ್ರಚಾರ ಸಮಿತಿ ಉಸ್ತುವಾರಿ ಸಂಶುದ್ಧೀನ್, ಪ್ರಮುಖರಾದ ಕೆ.ಎಂ. ಮುಸ್ತಫ, ಅಕ್ರಮ ಸಮಿತಿ ಸದಸ್ಯ ಆದಂ ಕಡಬ, ನಂದರಾಜ್ ಸಂಕೇಶ್, ತೀರ್ಥರಾಮ ಪರ್ನೋಜಿ ಉಳುವಾರು, ಅರಂತೋಡು ಗ್ರಾಮ ಸಮಿತಿ ಅಧ್ಯಕ್ಷ ಜನಾರ್ಧನ ಅಡ್ಕಬಳೆ, ದೇವಪ್ಪ ಗೌಡ ಕುಂದಲ್ಪಾಡಿ, ಅಶ್ರಫ್ ಗುಂಡಿ, ಜುಬೈರ್, ತಾಜುದ್ಧೀನ್ ಅರಂತೋಡು, ಶಂಕರ ನಾರಾಯಣ ಚೌಕಾರು, ಕುಟ್ಯಪ್ಪ, ಕೃಷ್ಣ, ಸದಾನಂದ ಮೇರ್ಕಜೆ, ನಾಸಿರ್ ಕೊಡಕಜೆ, ಕೆ.ಎಂ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಎಸ್.ಎಸ್.ಯು.ಐ.ನ ಆಶಿಕ್ ಅರಂತೋಡು ಸ್ವಾಗತಿಸಿ ವಂದಿಸಿದರು.