ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ

0

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯು ದ. ಕ ಜಿಲ್ಲಾ ಸುಳ್ಯ ತಾಲೂಕು ಮರ್ಕಂಜ ಗ್ರಾಮದ ಮಿತ್ತಡ್ಕ ಪ ಜಾತಿ ಸೇವಾ ಬಸದಿಯ ಶ್ರೀಮತಿ ನಮಿನಾ ಮನೆಯಲ್ಲಿ ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಿ.ಜಗನ್ನಾಥ ಜಯನಗರ ಅಂಬೇಡ್ಕರ್ ವಿಚಾರಧಾರೆ ಕುರಿತು ಮಾತನಾಡಿದರು.

ಈ ಸಂದರ್ಭ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಯತೀಶ್ ಕಂಜಿಪಿಲಿ, ಷಣ್ಮುಖ ಸೂಟೆಗದ್ದೆ, ಹೇಮಕುಮಾರ್ ಜೋಗಿ ಮೂಲೆ, ಉಪೇಂದ್ರ ಮಿತ್ತಡ್ಕ, ಶೇಖರ್ ಹೊಸೊಳಿಕೆ ಸೇವಾ ಬಸದಿಯ ಬಂಧುಗಳು ಉಪಸ್ಥಿತರಿದ್ದರು.