ಬಳ್ಪ: ಕಡವೆ ಮೇಲೆ ಹಾರಿ ಗಂಭೀರ ಗಾಯಗೊಂಡ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲು

0

ದನಗಳನ್ನು ಮೇಯಿಸಲು ಹೋದಾಗ ಕಡವೆ ಮೇಲೆ ಹಾರಿ ಗಂಭೀರ ಗಾಯಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಬಳ್ಪ ಗ್ರಾಮದಿಂದ ವರದಿಯಾಗಿದೆ.
ಬಳ್ಪ ಗ್ರಾಮದ ಆಲ್ಕಬೆ ರಾಮಣ್ಣ ಗೌಡರ ಪುತ್ರ ಸಂಜಯ್ ಎಂಬವರು ತಮ್ಮ ಮನೆಯ ದನಗಳನ್ನು ಮೇವಿಗಾಗಿ ಕರೆದೊಯ್ಯುವಾಗ ದಿಢೀರನೆ ಕಡವೆಯೊಂದು ಇವರ ಮೇಲೆ ಹಾರಿದ ಕಾರಣ ಸಂಜಯರ ಕೈ ಮತ್ತು ಸೊಂಟಕ್ಕೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ. ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಪಂಜ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕರಾದ ಕುಳ ಪುಟ್ಟಣ್ಣ ಗೌಡರ ಮನೆಯಿಂದ ಇದುವರೆಗೆ 5 ನಾಯಿಗಳನ್ನು ಚಿರತೆ ಕೊಂಡೊಯ್ದಿರುವುದಾಗಿ ತಿಳಿದು ಬಂದಿದೆ. ಚುನಾವಣಾ ಸಂದರ್ಭದಲ್ಲಿ ಕೃಷಿಕರ ಕೋವಿಗಳನ್ನು ಡೆಪಾಸಿಟ್ ಇಟ್ಟು ಕೃಷಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆಯೆಂದು ಕುಳ ಪುಟ್ಟಣ್ಣ ಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.