ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೌರಮಾನ ಯುಗಾದಿ ಪ್ರಯುಕ್ತ ರಥೋತ್ಸವ

0

ಹೆಚ್ಚಿದ ಭಕ್ತರ ಸಂದಣಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೌರಮಾನ ಯುಗಾದಿ ಪ್ರಯುಕ್ತ ಇಂದು ಬೆಳಗ್ಗೆ ರಥೋತ್ಸವ ನಡೆಯಿತು.

ಅಲ್ಲದೆ ವಿಷು ಕಣಿ ಇಡುವ ಕಾರ್ಯಕ್ರಮವು ನಡೆಯಿತು. ಸೌರಮಾನ ಯುಗಾದಿಯ ಪ್ರಯುಕ್ತ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಆದ್ದರಿಂದ ದೇವಸ್ಥಾನದ ಒಳಗೆ ನೂಕು ನುಗ್ಗಲು ಉಂಟಾಯಿತು.