ಕನಕಮಜಲು: ಮನೆ ಬೀಗ ಮುರಿದು ನಗದು ಕಳವು

0

ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗದು ಕಳವುಗೈದ ಘಟನೆ ಕನಕಮಜಲು ಗ್ರಾಮದ ಕುತ್ಯಾಳದಲ್ಲಿ ಎ‌.12ರಂದು ಅಪರಾಹ್ನ ಸಂಭವಿಸಿದೆ.

ಕುತ್ಯಾಳದ ದಿ. ವೆಂಕಪ್ಪ ಗೌಡ ಎಂಬವರ ಮನೆಯಲ್ಲಿ ಅವರ ಪತ್ನಿ ಫ್ಯಾಕ್ಟರಿ ಕೆಲಸಕ್ಕೆ ಹಾಗೂ ಪುತ್ರ ವಂಶಿತ್ ಅವರು ಕೆವಿಜಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಕೆಲಸಕ್ಕೆ ಹೋಗಿದ್ದರೆನ್ನಲಾಗಿದೆ.
ಈ ವೇಳೆ ಮ‌ನೆಯ ಮುಂಬಾಗಿಲಿನ ಬೀಗ ಮುರಿದ ಕಳ್ಳರು, ಮನೆಯ ಕೊಠಡಿಯಲ್ಲಿದ್ದ ಗೋಡ್ರೇಜ್ ಬೀಗ ಮುರಿದು, ಅದರೊಳಗೆ ಇಟ್ಟಿದ್ದ 27000/ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ವಂಶಿತ್ ಅವರ ತಾಯಿ ಸಂಜೆ ಫ್ಯಾಕ್ಟರಿ ಕೆಲಸ ಮುಗಿಸಿ, ಮನೆಗೆ ಬಂದಾಗ ಮನೆಯ ಬೀಗ ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತೆನ್ನಲಾಗಿದೆ. ಕೊಠಡಿಯೊಳಗಿನ ಗೋಡ್ರೇಜ್ ಬೀಗ ಒಡೆದಿದ್ದು, ಅದರೊಳಗೆ ಇಟ್ಟಿದ್ದ ನಗದು ಕಳ್ಳತನವಾಗಿತ್ತು.

ಅವರು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿ, ಬಳಿಕ ವಂಶಿತ್ ಅವರು ಬಂದ ಬಳಿಕ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು.
ಸ್ಥಳಕ್ಕೆ ಸುಳ್ಯ ಪೊಲೀಸ್ ಠಾಣೆಯ ಕ್ರೈಂ ಎಸ್‌.ಐ. ಸರಸ್ವತಿ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.