ಮೇನಾಲದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

0

ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ ಕಾಲೋನಿಯಲ್ಲಿ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸುಳ್ಯ ಇದರ ಅಜ್ಜಾವರ ಘಟಕದ ಅಧ್ಯಕ್ಷ ಹರೀಶ್ ಮೇನಾಲ ಅವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಪಕ್ಕಿರ ಮೇನಾಲ ಮತ್ತು ಕುಂಜೀರವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸತೀಶ್ ಬೂಡುಮಕ್ಕಿ, ಚಂದ್ರಶೇಖರ ಪಲ್ಲತ್ತಡ್ಕ, ಕರುಣಾಕರ ಪಲ್ಲತ್ತಡ್ಕ, ವಿಜಯಕುಮಾರ್ ಆರ್ಲಡ್ಕ, ಚೋಮ ಗಾಂಧೀನಗರ, ದಿಲೀಪ್ ಕೊಡಿಯಾಲ್ ಬೈಲ್,
ಶ್ರವಣ್ ಕೊಡಿಯಾಲ್ ಬೈಲ್, ಸುಪ್ರೀತ್ ಬಯಂಬುರವರು ಹಾಜರಿದ್ದರು . ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಸೇರಿದಂತೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.