ಮೊಗರ್ಪಣೆ ಬಳಿ ರಸ್ತೆಯ ತಡೆ ಬೇಲಿಗೆ ದೋಸ್ತ್ ವಾಹನ ಡಿಕ್ಕಿ ,ವಾಹನ ಜಖಮ್

0

ಸುಳ್ಯ ಮೊಗರ್ಪಣೆ ತಿರುವು ಬಳಿ ಚಾಲಕನ ನಿಯಂತ್ರಣ ತಪ್ಪಿ ದೋಸ್ತ್ ಗಾಡಿ ರಸ್ತೆ ಬದಿಯಲ್ಲಿರುವ ತಡೆ ಬೇಲಿಗೆ ಡಿಕ್ಕಿ ಹೊಡೆದ ಘಟನೆ ಏಪ್ರಿಲ್ 18ರಂದು ರಾತ್ರಿ ಸುಮಾರು 10 ಘಂಟೆಗೆ ಸಂಭವಿಸಿದೆ.


ಮೈಸೂರಿನಿಂದ ಮಂಗಳೂರಿಗೆ ಬಾಳೆಎಲೆ ಸಾಗಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ಗಾಡಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದ್ದು, ಡಿಕ್ಕಿ ಪರಿಣಾಮ ಗಾಡಿಯ ಮುಂಭಾಗ ನಜ್ಜುಗುಜ್ಜಾಗಿದೆ, ಅದೃಷ್ಟವಶಾತ್ ಚಾಲಕನಿಗೆ ಯಾವುದೇ ಹಾನಿ ಸಂಭವಿಸಿಲ್ಲ.