ಲೋಕಸಭಾ ಚುನಾವಣೆ ಪ್ರಯುಕ್ತ ಪಂಜದಲ್ಲಿ ಸಹಕಾರಿ ಕ್ಷೇತ್ರದ ಜನಪ್ರತಿನಿಧಿಗಳ ಸಭೆ

0

ಸಹಕಾರಿ ಕ್ಷೇತ್ರದ ಜಪ್ರತಿನಿಧಿಗಳು ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಳ್ಳಿ : ರಾಜಾರಾಮ ಭಟ್

ಸುಳ್ಯ ವಿಧಾನ ಸಭಾ ಕ್ಷೇತ್ರದ ಸಹಕಾರಿ ಜನಪ್ರತಿನಿಧಿಗಳ ಸಭೆ ಪಂಜ ಸಿ. ಎ ಬ್ಯಾಂಕ್ ನಲ್ಲಿ ನಡೆಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಜಿಲ್ಲಾ ಸಹಕಾರಿ ಪ್ರಕೋಷ್ಯ ಅಧ್ಯಕ್ಷ ರಾಜಾರಾಮ್ ಭಟ್ ಮಾತನಾಡಿ ಸಹಕಾರಿ ಪ್ರತಿನಿಧಿಗಳು ಗ್ರಾಮ ಮಟ್ಟದಲ್ಲಿ ಮೋದಿ ಸರಕಾರದ ಜನಪರ ಕಾರ್ಯಕ್ರಮಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಸುಳ್ಯ ಮಂಡಲದ ಸುಮಾರು 50 ಜನ ಪ್ರಮುಖರು ಹಾಜರಿದ್ದರು.
ಈ ಸಭೆಯಲ್ಲಿ ಎಸ್. ಎನ್ ಮನ್ಮಥ,
ದಾಮೋದರ ಗುಂಡ್ಯ ,ವೆಂಕಟ್ ದಂಬೆಕೋಡಿ, ವಿಕ್ರಂ ಅಡ್ವಂಗಾಯ, ನಾರಾಯಣ ಬೊಮ್ಮೆಟ್ಟಿ ,ಜಯಪ್ರಕಾಶ್ ಕೂಜುಗೋಡು, ಚಂದ್ರಶೇಖರ ಶಾಸ್ತ್ರಿ, ಸಂತೋಷ ಜಾಕೆ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.