ಅರಂತೋಡು ಬಿಜೆಪಿ ವತಿಯಿಂದ ಮಹಾಸಂಪರ್ಕ ಅಭಿಯಾನ

0

ನಾಲ್ಕು ತಂಡಗಳ ಮೂಲಕ ಮನೆಮನೆಗೆ ತೆರಳಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಕಾರ್ಯಕರ್ತರಿಂದ ಮತಯಾಚನೆ

ಅರಂತೋಡಿನಲ್ಲಿ ಬಿಜೆಪಿ ವತಿಯಿಂದ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮವು ಎ.21ರಂದು ಜರುಗಿದ್ದು, ಬಿಜೆಪಿ ಕಾರ್ಯಕರ್ತರು ನಾಲ್ಕು ತಂಡಗಳ ಮೂಲಕ ಪ್ರತೀ ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕೆ.ಕೆ. ನಾರಾಯಣ, ದೀಪಕ್ ಕುತ್ತಮೊಟ್ಟೆ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನ್ನೂರು, ಜಗದೀಶ್ ಕುಂಟುಕಾಡು, ಸಂತೋಷ್ ಕಾಪಿಲ, ಸತೀಶ್ ಕಾಪಿಲ, ನವೀನ್ ಕುತ್ತಮೊಟ್ಟೆ, ಶ್ರೀನಿಧಿ, ಭವಿತ್ ಕುಂಟುಕಾಡು, ಪ್ರಶಾಂತ್ ಕಾಪಿಲ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತೊಡಿಕಾನ ಭಾಗದಲ್ಲಿ ಮನೆ ಮನೆ ಭೇಟಿ ನಡೆಸಿ, ಮತಯಾಚಿಸಿದರು.

ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ ನೇತೃತ್ವದಲ್ಲಿ ಶಶಿಧರ ದೇರಾಜೆ, ಪ್ರದೀಪ ಗುಂಡ್ಲ, ಶಿವಾನಂದ ಕುಕ್ಕುಂಬಳ, ಸತೀಶ್ ನಾಯ್ಕ, ತೀರ್ಥರಾಮ ಅಡ್ಕಬಳೆ, ಕುಸುಮಾಧರ ಅಡ್ಕಬಳೆ ಮತ್ತಿತರ ಕಾರ್ಯಕರ್ತರು ದೇರಾಜೆ – ಬಿಳಿಯಾರು ಪರಿಸರದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಬಿಜೆಪಿ ಆಲೆಟ್ಟಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ನೇತೃತ್ವದಲ್ಲಿ ಶ್ರೀಮತಿ ಮಾಲಿನಿ ಉಳುವಾರು, ವಿನೋದ್ ಉಳುವಾರು, ಕಿಶೋರ್ ಯು.ಎಂ. ಯು.ಎಸ್. ಮೇದಪ್ಪ, ಗಣೇಶ್ ಉಳುವಾರು, ಪ್ರವೀಣ್ ಎಳ್ಪಕಜೆ, ಗಾಯತ್ರಿ, ಮಾಲತಿ, ಶಾಂತಿ, ವಾಣಿ ಮತ್ತಿತರ ಕಾರ್ಯಕರ್ತರುಗಳು ಅರಂತೋಡು ಪರಿಸರದಲ್ಲಿ ಮನೆಮನೆಗೆ ತೆರಳಿ ಮತಯಾಚಿಸಿದರು.

ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ ನೇತೃತ್ವದಲ್ಲಿ ಚಂದ್ರಶೇಖರ ಚೋಡಿಪಣೆ, ಮೋಹನ ಅಡ್ತಲೆ, ಹರಿಪ್ರಸಾದ್ ಅಡ್ತಲೆ, ಲೋಹಿತ್ ಮೇಲಡ್ತಲೆ ಮತ್ತಿತರರು ಅಡ್ತಲೆ ಪರಿಸರದಲ್ಲಿ ಮನೆಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪರವಾಗಿ ಮತಯಾಚನೆ ನಡೆಸಿದರು.