ಎ. 26: ಶೃಂಗೇರಿ ಮಠಾಧೀಶರು ಬಳ್ಪ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮನ, ಎ. 27ರಂದು ಸಾರ್ವಜನಿಕ ಪಾದಪೂಜೆ-ಭಿಕ್ಷಾವಂದನೆ

0

ಶೃಂಗೇರಿ ಪೀಠಾಧೀಶರಾದ ಶ್ರೀಮಜ್ಜಗದ್ಗರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ಎ. 26ರಂದು ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ, ಎ. 27ರಂದು ಸ್ವಾಮಿಗಳಿಗೆ ಪಾದಪೂಜೆ ಭಿಕ್ಷಾವಂದನೆ ನಡೆಯಲಿದೆ.
ಎ. 26ರಂದು ಸಂಜೆ 7 ಗಂಟೆಗೆ ಸ್ವಾಮಿಗಳಿಗೆ ಸ್ವಾಗತ, ಧೂಳಿಪಾದಪೂಜೆ, ಫಲ ಸಮರ್ಪಣೆ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪುಷ್ಪಾಂಜಲಿ, ಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ಎ. 27ರಂದು ಶ್ರೀ ತ್ರಿಶೂಲಿನೀ ಸನ್ನಿಧಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಪ್ರಸನ್ನ ಪೂಜೆ, ಸಾರ್ವಜನಿಕರಿಂದ ಪಾದಪೂಜೆ – ಭಿಕ್ಷಾವಂದನೆ ನಡೆದು, 10.30ರಿಂದ ಶ್ರೀ ಜಗದ್ಗುರುಗಳಿಂದ ಅನುಗ್ರಹಭಾಷಣ, ಸಮಸ್ತಭಕ್ತರಿಗೆ ಫಲಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.