ಬಿಜೆಪಿ ಸೇರಿದವರು 24 ಗಂಟೆಯಲ್ಲಿ ಮತ್ತೆ ಕಾಂಗ್ರೆಸ್ ಸೇರ್ಪಡೆ

0

ಎ.23ರಂದು ಚೆಂಬು ಗ್ರಾಮದಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ಮತದಾರರು 24 ಗಂಟೆಯೊಳಗೆ‌ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವುದಾಗಿ ವರದಿಯಾಗಿದೆ.

ಎ.24ರಂದು ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾರತಿ ರವರ ಮನೆಯಲ್ಲಿ ನಡೆದ ಸಭೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ತೆಕ್ಕೆಗೆ ಮರಳಿದರು.
ವಲಯ ಕಾಂಗ್ರೆಸ್ ಅಧ್ಯಕ್ಷರಾದ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣದ ಜಿಲ್ಲಾ ಅಧ್ಯಕ್ಷರಾದ ಸೂರಜ್ ಹೊಸೂರು ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕಲಾ ಕಟ್ಟೆ ಪಾರೆ ಹಾಗೂ ಗಿರೀಶ್ ಹೊಸೂರು, ಬೂತ್ ಅಧ್ಯಕ್ಷರುಗಳಾದ ಚನ್ನಪ್ಪ ನಡುಬೆಟ್ಟು, ಪಕೀರ ಮಂಗಳಪ್ಪಾರೆ, ಮುಖಂಡರುಗಳಾದ ಜೀವಿ ಗಣಪಯ್ಯ, ಬಾಲಂಬಿ ಸೋಮಣ್ಣ, ನವೀನ ರಾಮಕಜೆ, ವಾಸು ಕಾಚೇಲು, ಭೋಜ ಗುಂಡಿಮಜೇಯಲು ಮತ್ತಿತರರು ಉಪಸ್ಥಿತರಿದ್ದರು.
ಪಕ್ಷಕ್ಕೆ ಮರಳಿದವರು : ಮುದಡ್ಕ ವಾಸುದೇವ, ಮುದಡ್ಕ ಜನಾರ್ದನ, ಮುದಡ್ಕ ನಾರಾಯಣ, ಮುದಡ್ಕ ಮನೋಜ, ಮುದಡ್ಕ ಸುಶೀಲ, ಮುದಡ್ಕ ಕೊರಗಪ್ಪ ಸೇರ್ಪಡೆಯಾದರು.