ಸುಳ್ಯದಲ್ಲಿ ಎಸ್ಎಕೆ ವಿಓಸಿ ಮಲ್ಟಿಬ್ರಾಂಡ್ ದ್ವಿಚಕ್ರ ವಾಹನ ಅಧಿಕೃತ ಸೇವಾಕೇಂದ್ರ ಶುಭಾರಂಭ

0

ಸುಳ್ಯ ಹಳೇಗೆಟು ಮೊಗರ್ಪಣೆ ಬೈತ್ತಡ್ಕ ಕಾಂಪ್ಲೆಕ್ಸ್ ನಲ್ಲಿ ರಾಷ್ಟ್ರೀಯ ಖ್ಯಾತಿಯ ವಾಯ್ಸ್ ಆಫ್ ಕಸ್ಟಮರ್ ವಿಓಸಿ ಕಂಪೆನಿಯ ಮಲ್ಟಿ ಬ್ರಾಂಡ್ ದ್ವಿಚಕ್ರ ವಾಹನ ಅಧಿಕೃತ ಸೇವಾ ಕೇಂದ್ರ ಸುಳ್ಯ ಶಾಖೆ ಎಸ್ ಎ ಎಕೆ ಎ.22 ರಂದು ಶುಭಾರಂಭಗೊಂಡಿತು.


ಇದರ ಉದ್ಘಾಟನೆಯನ್ನು ಸುಳ್ಯ ಪೋಲಿಸ್ ವೃತ ನಿರೀಕ್ಷಿಕರಾದ ಸತ್ಯನಾರಾಯಣ ನೇರವೆರಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ,ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,ಸುಳ್ಯದ ಯುವ ಉದ್ಯಮಿಗಳಾದ ಶ್ರೀಕಾಂತ್ ಮಾವಿನಕಟ್ಟೆ,ಅಶ್ವಿನ್ ,ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಬೈತ್ತಡ್ಕ ಕಾಂಪ್ಲೆಕ್ಸ್ ಮಾಲಕ ಬಾಲಸುಬ್ರಹ್ಮಣ್ಯ,ಉದ್ಯಮಿ ಅಶ್ರಫ್ ಕೊಟ್ಯಾಡಿ,ಮೊಗರ್ಪಣೆ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಪುಡ್,ಸಂಶುದ್ದೀನ್ ಭಾರತ್ ಶಾಮಿಯಾನ,ವಿಓಸಿ ಕಂಪನಿಯ ರೀಜನಲ್ ಮ್ಯಾನೇಜರ್ ಶಂಶಾಕ್,ಕರ್ನಾಟಕ ಡೀಲರ್ ಡೇವಲ್ಪ್ಮೆಂಟ್ ಮ್ಯಾನೇಜರ್ ಪೈಸಲ್,ಮಾರ್ಕೆಟಿಂಗ್ ವಿಭಾಗದ ಸಿದ್ದಾರ್ಥ್ ಮೊದಲಾದವರು ಉಪಸ್ಥಿತರಿದ್ದರು.


ಮಾಲಕ ಶಮೀರ್ ಮತ್ತು ಸುಳ್ಯ ಉದ್ಯಮಿ ಅಬೂಭಕ್ಕರ್ ರವರು ಸರ್ವರನ್ನೂ ಸ್ವಾಗತಿಸಿದರು.

ಎಲ್ಲಾ ರೀತಿಯ ದ್ವಿಚಕ್ರ ವಾಹನಗಳ ಪರಿಪೂರ್ಣ ಸೇವೆಗಳು ಈ ಸೇವಾ ಕೆಂದ್ರ ದಲ್ಲಿ ದೊರೆಯಲಿದೆ.
ವಾಹನಗಳ ಇನ್ಸೂರೆನ್ಸ್,ಎಕ್ಸ್ಟೇಂಡ್ ವಾರಂಟಿ,ದ್ವಿಚಕ್ರ ವಾಹನಗಳ ಬಿಡಿಭಾಗಗಳು,ಎಸ್ಸಸರಿಸ್,ಹಾಗೂ ಇನ್ನಿತರ ಸೇವೆಗಳು ನಮ್ಮಲ್ಲಿ ದೊರೆಯುತ್ತದೆ.
ಶುಭಾರಂಭ ಪ್ರಯಕ್ತ ಇಂಜಿನ್ ಆಯಿಲ್ ಬದಲಾವಣೆಗೆ ಉಚಿತವಾಗಿ ಆರು ತಿಂಗಳ ವಾರಂಟಿ ನೀಡಲಾಗುವುದು.