ಕಲ್ಲುಗುಂಡಿ: ಅಪಸ್ಮರ ಕಾಯಿಲೆಯಿಂದ ಅಟೋರಿಕ್ಷಾದಿಂದ ಬಿದ್ದು ವ್ಯಕ್ತಿಗೆ ಗಂಭೀರ ಗಾಯ – ಆಸ್ಪತ್ರೆಗೆ ದಾಖಲು

0

ಅಪಸ್ಮರ ಕಾಯಿಲೆಯಿಂದ ವ್ಯಕ್ತಿಯೋರ್ವರು ಅಟೋರಿಕ್ಷಾದಿಂದ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ದ‌‌.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಎ.26ರಂದು ಅಪರಾಹ್ನ ಸಂಭವಿಸಿದೆ.

ಸಂಪಾಜೆ ಕೀಲಾರಿನ ಕುಶಾಂತ್ ದಂಪತಿ ಕಲ್ಲುಗುಂಡಿಯ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿ ಅಟೋರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಲ್ಲುಗುಂಡಿಯ ಕೀಲಾರು ರಸ್ತೆಯ ಸರ್ವೀಸ್ ಸ್ಟೇಶನ್ ಬಳಿಗೆ ತಲುಪುತ್ತಿದ್ದಂತೆ ಕುಶಾಂತ್ ಅವರು ಅಪಸ್ಮರ ಕಾಯಿಲೆಯಿಂದಾಗಿ ರಿಕ್ಷಾದಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ.
ಬಳಿಕ ಸ್ಥಳೀಯರು ಸೇರಿ ಅಂಬ್ಯುಲೆನ್ಸ್ ಮೂಲಕ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.