ಕಲ್ಲುಮುಟ್ಲು ಮತಗಟ್ಟೆಯ ಬಳಿ ಕಾಂಗ್ರೆಸ್ ಪರ ಮತಯಾಚಿಸಿದ ಇಕ್ಬಾಲ್ ಎಲಿಮಲೆ ಹಾಗೂ ಕೆ ಎಸ್ ಉಮ್ಮರ್

0

ಇತ್ತೀಚೆಗೆ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಐ.ಕೆ ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ನಗರ ಪಂಚಾಯತ್ ಸದಸ್ಯ ಕೆ.ಎಸ್ ಉಮ್ಮರ್ ಸುಳ್ಯ ಕಲ್ಲುಮುಟ್ಲು ಮತಗಟ್ಟೆ ಸಂಖ್ಯೆ 182ರ ಬಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ಅವರ ಪರವಾಗಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಕಲ್ಲುಮುಟ್ಲು ಕಾಂಗ್ರೆಸ್ ಬೂತಿನ ಅಧ್ಯಕ್ಷ ಅಶ್ರಫ್, ಅಬ್ದುಲ್ ಲತೀಫ್ ಕುಂಬ್ಳೆ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.