ಕೊಡಗು ಸಂಪಾಜೆಯ ಅರಮನೆತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

0

ಕೊಡಗು ಸಂಪಾಜೆಯ ಅರಮನೆ ತೋಟ ಶ್ರೀ ಮಹಾವಿಷ್ಣು ಮೂರ್ತಿ ದೈವದ ಕಾಲಾವಧಿ ಒತ್ತೆಕೋಲ ಮೇ 10 ಮತ್ತು 11 ರಂದು ವಿಜೃಂಭಣೆಯಿಂದ ನಡೆಯಲಿದ್ದು, ಏ .26 ರಂದು ಬೆಳಗ್ಗಿನ ಶುಭ ಘಳಿಗೆಯಲ್ಲಿ ಕೊಳ್ಳಿ ಕಡಿಯುವ ಮುಹೂರ್ತ ನಡೆಯಿತು.

ಈ ವೇಳೆ ಶ್ರೀ ದೈವದ ಚಾವಡಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಗೌರವಾಧ್ಯಕ್ಷ ಶಭರೀಶ್ ಕುಡ್ಕುಳಿ ಸಂಪಾಜೆ, ಅಧ್ಯಕ್ಷ ಕೊರಗಪ್ಪ ಅರಮನೆ ತೋಟ, ಕಾರ್ಯದರ್ಶಿ ಕೃಷ್ಣ ಅರಮನೆ ತೋಟ, ಉಪಕಾರ್ಯದರ್ಶಿ ಚಂದ್ರ ಶೇಖರ, ತಾಣದ ಪೂಜಾರಿ ಪಕೀರ ಅಂಬಟೆಕಜೆ , ಖಜಾಂಜಿ ಮುರಳಿ ಹೆ.ಚ್, ಸರ್ವಸದಸ್ಯರು, ಊರ -ಪರವೂರ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಅರಶಿನ ಪ್ರಸಾದ ಸ್ವೀಕರಿಸಿ ಕೃಪೆಗೆ ಪಾತ್ರರಾದರು