ಮೊಗರ್ಪಣೆ: ಓ ಎಸ್ ಎ ವತಿಯಿಂದ ಎಮ್ಮೆಮಾಡು ಯಾತ್ರಿಕರಿಗೆ ಉಚಿತ ತಂಪು ಪಾನೀಯಗಳ ವ್ಯವಸ್ಥೆ

0

ಮೊಗರ್ಪಣೆ ಹಳೆ ವಿದ್ಯಾರ್ಥಿಗಳ ಸಂಘ ಓ ಎಸ್ ಎ ವತಿಯಿಂದ ಕೊಡಗಿನ ಪ್ರಸಿದ್ಧ ಕೇಂದ್ರವಾದ ಎಮ್ಮೆಮ್ಮಾಡು ಉರೂಸ್ ಸಮಾರಂಭಕ್ಕೆ ತೆರಳುವ ಯಾತ್ರಿಕರಿಗೆ ಏಪ್ರಿಲ್ 29 ರಂದು ಉಚಿತ ತಂಪು ಪಾನೀಯ ವಿತರಸುವ ಸೇವೆಯನ್ನು ಮೊಗರ್ಪಣೆ ಮಸೀದಿ ಮುಂಭಾಗದಲ್ಲಿ ಮಾಡಲಾಯಿತು.
ಬಿಸಿಲಿನ ಬೇಗೆಗೆ ದ್ವಿಚಕ್ರ ವಾಹನಗಳಲ್ಲಿ ಮತ್ತು ಕಾರು ಇನ್ನಿತರ ದೊಡ್ಡ ವಾಹನಗಳಲ್ಲಿ ಪ್ರಯಾಣಿಸುವ ನೂರಾರು ಯಾತ್ರಿಕರು ಈ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಂಡರು.


ಸ್ಥಳೀಯ ಮಸೀದಿ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ಚಾಲನೆಯನ್ನು ನೀಡಿ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೆ ಎಂ ಬಶೀರ್, ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು, ಸ್ಥಳೀಯ ಯುವಕರು ಭಾಗವಹಿಸಿದ್ದರು.