ಕೇಶವ ಗೌಡ ಹುದೇರಿ ಹೃದಯಾಘಾತದಿಂದ ನಿಧನ

0

ಮುರುಳ್ಯ ಗ್ರಾಮದ ಹುದೇರಿ ದಿ.ಸಂಕಪ್ಪ ಗೌಡರ ಪುತ್ರ ಕೇಶವರವರು ಹೃದಯಾಘಾತದಿಂದ ಎ.29 ರಂದು ಮುಂಬೈಯಲ್ಲಿ ನಿಧನರಾದರು. ಇವರು ಮುಂಬೈಯ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.


ಮೃತರು ಪತ್ನಿ ತಾರಾ, ಇಬ್ಬರು ಪುತ್ರಿಯರು, ಇಬ್ಬರು ಸಹೋದರರು, ಸಹೋದರಿಯರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತದೇಹವು ಮುಂಬೈಯಿಂದ ಇಂದು ಸಂಜೆ ಊರಿಗೆ ತಲುಪಲಿದ್ದು, ನಂತರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.