ಕೇನ್ಯ : ಕಬಡ್ಡಿ ಪಂದ್ಯಾಟ

0

ಕೇನ್ಯ ಈಗಲ್ ಆಟಾಕರ್ಸ್ ನೇಲ್ಯಡ್ಕ ಇದರ ಆಶ್ರಯದಲ್ಲಿ ನಡೆದ ಕೇನ್ಯ, ಬಲ್ಪ, ಮೊಗ್ರ ಗ್ರಾಮಗಳ 8 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ಸಿದ್ದಿವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಪುರುಷ್ ವಾರಿಯರ್ಸ್ ನೇಲ್ಯಡ್ಕ ದ್ವಿತೀಯ, ಶಕ್ತಿ ಎಂಟರ್ಪ್ರೈಸಸ್ ತೃತೀಯ ಹಾಗೂ ಶ್ರೀ ವಿಷ್ಣು ಫ್ರೆಂಡ್ಸ್ ಕೇನ್ಯ ಚತುರ್ಥ ಸ್ಥಾನ ಪಡೆದು ಕೊಂಡಿದೆ. ಶ್ರೀ ದುರ್ಗಾ ಯುವಕ ಮಂಡಲ ಕೇನ್ಯ ಶಿಸ್ತು ಬದ್ಧ ತಂಡವಾಗಿ ಹೊರಹೋಮ್ಮಿದೆ. ಬೆಸ್ಟ್ ರೈಡರ್ ಆಗಿ ದೇವಿಪ್ರಸಾದ್ ರೈ ಗೆಜ್ಜೆ, ಬೆಸ್ಟ್ ಕ್ಯಾಚರ್ ಆಗಿ ಚಿದಾನಂದ ಬೀದಿಗುಡ್ಡೆ, ಬೆಸ್ಟ್ ಆಲ್ ರೌಂಡರ್ ಆಗಿ ಮನೀಶ್ ಕಾರ್ಜ ಆಯ್ಕೆಯಾದರು.