ಸುಳ್ಯದ ಆಶ್ವಿಜ್ ಅತ್ರೇಯರಿಗೆ ಅಂತರಾಜ್ಯ ಮಟ್ಟದ ಕಯ್ಯಾರ ಕೋಗಿಲೆ ಪ್ರಶಸ್ತಿ

0

ನಮ್ಮ ಜವನೆರ್ ಜೋಡುಕಲ್ಲು ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗ , ರೋಟರಿ ಕ್ಲಬ್ ದೇರಳಕಟ್ಟೆ ಮಂಗಳೂರು ಇವರ ಸಹಯೋಗದಲ್ಲಿ ನಡೆದ ಕಯ್ಯಾರ ಕೋಗಿಲೆ ಅಂತರಾಜ್ಯಮಟ್ಟದ ಸಂಗೀತ ಸ್ಪರ್ಧೆಯು ಮೇ 4ರಂದು ನಡೆಯಿತು.


ಆಡಿಷನ್ ಹಂತದಿಂದ ಆಯ್ಕೆಯಾದ 8 ಮಂದಿಗೆ ಅಂತಿಮ ಹಣಾಹಣಿ ಮೂರು ಸುತ್ತಿನ (ಭಕ್ತಿಗೀತೆ ಮೆಲೋಡಿ ಹಾಡು ಹಾಗೂ ಚಿತ್ರಗೀತೆ ಹಾಡು ಹಾಡು)ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಶ್ವಿಜ್ ಅತ್ರೇಯ ಸುಳ್ಯ ಇವರು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದು ಕಯ್ಯಾರ ಕೋಗಿಲೆ ಪ್ರಶಸ್ತಿ ಪಡೆದಿರುತ್ತಾರೆ.

ಅಂತರಾಜ್ಯದಲ್ಲಿ ಸುಳ್ಯದ ಹೆಸರನ್ನು ಮಿಂಚುವಂತೆ ಮಾಡಿರುತ್ತಾರೆ .ಇವರು ಗಾನಸಿರಿ ಕಲಾ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಡಾ. ಕಿರಣಕುಮಾರ್ ಗಾನಸಿರಿ ಹಾಗೂ ಶ್ರೀ ಲಕ್ಷ್ಮಿ ಕಾಂಚನ ಈಶ್ವರ ಭಟ್ ಇವರ ಶಿಷ್ಯ.