ಕಳಂಜ ಗ್ರಾ.ಪಂ ಸಭೆ

0

ವಿದ್ಯುತ್ ಲೈನ್ ದುರಸ್ತಿ, ಮಣಿಮಜಲು ಸಂಪರ್ಕ ರಸ್ತೆ ಬಗ್ಗೆ ಗಂಭೀರ ಚರ್ಚೆ

ಕಳಂಜ ಗ್ರಾ.ಪಂ ನ ಗ್ರಾಮ ಸಭೆ ಜು.26 ರಂದು ನಡೆಯಿತು. ತಂಬಿನಡ್ಕ
ವಿದ್ಯುತ್ ಲೈನ್ ದುರಸ್ತಿ, ಮಣಿಮಜಲು ಸಂಪರ್ಕ ರಸ್ತೆ ವ್ಯವಸ್ಥೆ ಬಗ್ಗೆ, ಸೋಲಾರ್ ದೀಪದ ಬಗ್ಗೆ ಗಂಭೀರ ಚರ್ಚೆ ನಡೆಯಿತು.

‌ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಪ್ರೇಮಲತಾ, ಸದಸ್ಯರಗಳಾದ ಗಣೇಶ್ ರೈ, ಪ್ರಶಾಂತ್ ಕುಮಾರ್ ಕಿಲಂಗೋಡಿ, ಶ್ರೀಮತಿ ಸುದಾ, ಕಮಲ ಉಪಸ್ಥಿತರಿದ್ದರು. ಪಿಡಿಒ ಶ್ರೀಮತಿ ಗೀತಾ ವರದಿ ವಾಚಿಸಿದರು. ಕಾರ್ಯದರ್ಶಿ ಪದ್ಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ ಸಿಬ್ಬಂದಿ ಗಿರಿಧರ ಕಳಂಜ ಸ್ವಾಗತಿಸಿದರು. ಪದ್ಮಯ್ಯ ಅವರು ವಂದಿಸಿದರು.