ಆದರ್ಶ ಸೌಹಾರ್ದ ಸಹಕಾರಿ ಸುಳ್ಯ ಶಾಖೆಯ 23 ನೇ ವರ್ಷಕ್ಕೆ ಪಾದಾರ್ಪಣೆ ಪ್ರಯುಕ್ತ ಗಣಪತಿ ಹವನ

0

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.‌ ಸೀತಾರಾಮ ರೈಯವರು ಅಧ್ಯಕ್ಷರಾಗಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಸುಳ್ಯ ಶಾಖೆ 23ನೇ ವರ್ಷಕ್ಕೆ ಪಾದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಜೂ. 28ರಂದು ಪುರೋಹಿತ ನಾಗಾರಾಜ ಭಟ್ಟರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು.


ಸಂಸ್ಥೆಯ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ, ನಿರ್ದೇಶಕರಾದ ಬಾಪು ಸಾಹೇಬ್, ರಿಕವರಿ ಆಫೀಸರ್ ಶ್ರೀಧರ್ ಪೂಜಾರಿ, ಸುಳ್ಯ ಶಾಖಾ ವ್ಯವಸ್ಥಾಪಕ ಮನೋಜ್ ಕುಮಾರ್, ಸಿಬ್ಬಂದಿಗಳಾದ ಶ್ರೀದೇವಿ, ಪ್ರಿಯಾ, ಅಕ್ಷತಾ, ದಿಕ್ಷೀತ್, ಹಿರಿಯರಾದ ಭಾಸ್ಕರ ನಾಯರ್, ಪ್ರಭಾಕರ ನಾಯರ್,
ಗೋಕುಲ್ ದಾಸ್, ಜೆ.ಕೆ ರೈ, ರಾಧಾಕೃಷ್ಣ ಸಿ, ತೀರ್ಥರಾಮ ಕೆ.ಜಿ, ಮಮತಾ, ಹಾರ್ತಿಕ್ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.