ಆಂಬ್ಯುಲೆನ್ಸ್ ಗೆ ಅಡ್ಡ ಬಂದ ಕಾಡುಕೋಣ : ಅಪಾಯದಿಂದ ಪಾರು

0

ಕುಕ್ಕಂದೂರು ಬಳಿ ನಡೆದ ಘಟನೆ

ಕುಕ್ಕಂದೂರು ಬಳಿ ಸಂಚರಿಸುತ್ತಿದ್ದ ಆಂಬ್ಯುಲೆನ್ಸ್ ವಾಹನಕ್ಕೆ ರಸ್ತೆಯಲ್ಲಿ ಏಕಾಏಕಿ ಕಾಡುಕೋಣ ಅಡ್ಡ ಬಂದು ಚಾಲಕ ವಾಹನವನ್ನು ನಿಯಂತ್ರಿಸಿದ ಕಾರಣ ಅಪಾಯದಿಂದ ಪಾರಾದ ಘಟನೆ ಜೂ 28 ರಂದು ತಡ ರಾತ್ರಿ ಸಂಭವಿಸಿದೆ.

ಸುಳ್ಯದಲ್ಲಿ ಕಾರ್ಯ ನಿರ್ವಹಿಸುವ ಆಂಬುಲೆನ್ಸ್ ಚಾಲಕ ಅಭಿಲಾಷ್ ಅವರು ಕೆಲಸ ಮುಗಿಸಿ ತಮ್ಮ ವಾಹನದಲ್ಲಿ ಅವರ ಮನೆಗೆ ತಡರಾತ್ರಿ ತೆರಳುತ್ತಿದ್ದರು. ಕುಕ್ಕಂದೂರಿನ ಕಿನ್ನಿಮಾನಿ ಪೂಮಾಣಿ ದೇವಸ್ಥಾನದ ಹತ್ತಿರ ಬರುತ್ತಿದ್ದಂತೆ ಏಕಾ ಏಕಿ ದೊಡ್ಡ ಗಾತ್ರದ ಕಾಡು ಕೋಣ ರಸ್ತೆಯಲ್ಲಿ ಅಡ್ಡ ಬಂದಿದ್ದು ಕೂಡಲೇ ಅವರು ಬ್ರೇಕ್ ಹಾಕಿ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ.


ಘಟನೆಯಿಂದ ವಾಹನ ಮತ್ತು ಅವರು ಅಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಅವರು ತಮ್ಮ ಮೊಬೈಲ್ ಫೋನ್ ಮೂಲಕ ಕಾಡು ಕೋಣದ ಚಿತ್ರವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.