ನಿವೃತ್ತ ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ಶಿವರಾಯ ಗೌಡ ಕಲುಂಗುಡಿಯವರಿಗೆ ಶ್ರದ್ಧಾಂಜಲಿ ಸಭೆ

0

ಮಂಗಳೂರು ಟ್ರಾಫಿಕ್, ಕುಂದಾಪುರ, ಶಂಕರನಾರಾಯಣ, ಬೈಂದೂರು, ಕೊಲ್ಲೂರು, ಪಾಂಡೇಶ್ವರ, ಬೆಳ್ತಂಗಡಿ, ವೇಣೂರು, ಬಜ್ಪೆ ಮತ್ತು ಸುಬ್ರಹ್ಮಣ್ಯದಲ್ಲಿ ಪೋಲಿಸ್ ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿ ಇತ್ತೀಚೆಗೆ ನಿಧನರಾದ
ಬಳ್ಪ ಗ್ರಾಮದ ಕಲುಂಗುಡಿ ನಿವಾಸಿ ಶಿವರಾಯ ಗೌಡರಿಗೆ ಶ್ರದ್ಧಾಂಜಲಿ ಸಭೆ‌ ಜು. 29ರಂದು ಕಲುಂಗುಡಿ ಮನೆಯಲ್ಲಿ ನಡೆಯಿತು.


ಮೃತರ ಪತ್ನಿ ಶ್ರೀಮತಿ ನಾಗವೇಣಿ, ಪುತ್ರ ಉದ್ಯಮಿ ಹಾಗೂ ನ್ಯಾಯವಾದಿ ಹರೀಶ್ ಕಲುಂಗುಡಿ, ಸೊಸೆ ನ್ಯಾಯವಾದಿ ಶ್ರೀಮತಿ ಭವ್ಯ ಹರೀಶ್, ಪುತ್ರಿಯರಾದ ಬೆಳ್ತಂಗಡಿಯಲ್ಲಿ ನೆಲೆಸಿರುವ ಶ್ರೀಮತಿ ಅನಿತಾ ರಾಮಚಂದ್ರ ಬೊಳ್ಳೂರು, ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ಶ್ರೀಮತಿ ಮಮತಾ ಪ್ರಶಾಂತ್ ಧರ್ಮಸ್ಥಳ, ಸಹೋದರರಾದ ರುಕ್ಮಯ್ಯ ಗೌಡ ಕಲುಂಗುಡಿ, ಸೂರಪ್ಪ ಗೌಡ ಕಲುಂಗುಡಿ, ಸಹೋದರಿ ಶ್ರೀಮತಿ ದೇವಕಿ ಆಲಂಗಾರು ಸೇರಿದಂತೆ ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೃತರಿಗೆ ನುಡಿನಮನ ಸಲ್ಲಿಸಿದರು.