ವಳಲಂಬೆ: ಶ್ರೀ ಶಂಖ ಚೂಡ ಕ್ಷೇತ್ರ, ಪುರಾಳಬದಿಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ , ಅಷ್ಠ ನಾಗ ಸಮಾರಾಧನೆ

0

ಗುತ್ತಿಗಾರು ಗ್ರಾಮದ ಮಣಿಯಾನ ಮನೆ ಬಳಿ ಜೀರ್ಣೋದ್ಧಾರವಾಗಲಿರುವ ಶ್ರೀ ಶಂಖ ಚೂಡ ಕ್ಷೇತ್ರ, ಪುರಾಳಬದಿ ವಳಲಂಬೆ ಇಲ್ಲಿ ಜೂ.26 ಜೂ.29 ರ ತನಕ ಸರ್ಪ ಸಂಸ್ಕಾರ, ಆಶ್ಲೇಷ ಬಲಿ , ಅಷ್ಠ ನಾಗ ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರಗಿದವು.

ಶ್ರೀ ನೀಲೇಶ್ವರ ತಂತ್ರಿಗಳ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.
ಜೂ. 26 ರಂದು ಬೆಳಿಗ್ಗೆ ಸರ್ಪಸಂಸ್ಕಾರ ಹಾಗೂ ಜೂ.29ರಂದು ‌ಬೆಳಿಗ್ಗೆ ಗಣಹೋಮ, ಶಾಂತಿ ಹೋಮ,‌ ಆಶ್ಲೇಷ ಬಲಿ , ಅಷ್ಠ ನಾಗ ಸಮಾರಾಧನೆ ಇತ್ಯಾದಿ ಪೂಜಾ ಕಾರ್ಯಕ್ರಮಗಳು ಜರಗಿದವು. ಕ್ಷೇತ್ರದ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು ಕಾರ್ಯಕ್ರಮ ಯಶಸ್ವಿ ಗೆ ಸಹಕರಿಸಿದರು.