ಸುಳ್ಯ ಸಿ.ಎ ಬ್ಯಾಂಕ್ ಆಂತರಿಕ ಲೆಕ್ಕಪರಿಶೋಧಕ ಶಿವಪ್ರಸಾದ್ ಎಸ್ ನಿವೃತ್ತಿ – ಬೀಳ್ಕೊಡುಗೆ

0

ಸುಳ್ಯ ಸಿ ಎ ಬ್ಯಾಂಕ್ ಆಂತರಿಕ ಲೆಕ್ಕಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಎಸ್ ನಿವೃತ್ತರಾಗಿದ್ದು ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಸುಳ್ಯ ಸಿ ಎ ಬ್ಯಾಂಕ್ ನ ಎ ಎಸ್ ವಿಜಯಕುಮಾರ್ ಸಭಾಭವನದಲ್ಲಿ ಜೂ.29ರಂದು ನಡೆಯಿತು.

ಶಿವಪ್ರಸಾದ್ ಎಸ್ ಇವರು 1991 ರಲ್ಲಿ ಸಿ ಎ ಬ್ಯಾಂಕ್ ನಲ್ಲಿ ಗುಮಾಸ್ತನಾಗಿ ಸೇರ್ಪಡೆಗೊಂಡು ಆಂತರಿಕ ಲೆಕ್ಕ ಪರಿಶೋಧಕ ಹುದ್ದೆಯವರೆಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿ 33 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು.

ಸಿ.ಎ.‌ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ ವಿ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ, ಸಿ.ಎ.ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷರಾದ ಬಾಲಗೋಪಾಲ ಎಂ, , ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ಸ್ವಾಗತಿಸಿ, ಪ್ರಸ್ತಾವನೆಗೈದರು. ನಿರ್ದೇಶಕ ಹೇಮಂತ್ ಕುಮಾರ್ ಕಂದಡ್ಕ ಧನ್ಯವಾದ ಸಮರ್ಪಿಸಿದರು.