ಸುಳ್ಯ ನಗರ ಯೋಜನಾ ಪ್ರಾಧಿಕಾರ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಪ್ರತ್ಯೇಕ ವಾಗಿ ರಚನೆಗೊಂಡ ಸುಳ್ಯ ನಗರ ಯೋಜನಾ ಪ್ರಾಧಿಕಾರ (SUDA) ಇದರ ಮೊದಲ ಅಧ್ಯಕ್ಷರಾಗಿ ನೇಮಕ ಗೊಂಡು, ಅಧಿಕಾರ ಸ್ವೀಕರಿಸಿದ ಕೆ. ಎಂ. ಮುಸ್ತಾಫರವರಿಗೆ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅಭಿನಂದನಾ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು.















ಈ ಸಂದರ್ಭದಲ್ಲಿ ಕರ್ನಾಟಕ
ರಾಜ್ಯ ಸಹಕಾರ ಪತ್ತಿನ ಸಂಘಗಳ
ಮಹಾ ಮಂಡಳ ನಿ. ಬೆಂಗಳೂರು ಇದರ ರಾಜ್ಯ ನಿರ್ದೇಶಕರಾದ ಚಂದ್ರ ಕೋಲ್ಚಾರ್, ಅಭಿನಂದನಾ ಸಮಿತಿ ಅಧ್ಯಕ್ಷರಾದ ಎಸ್. ಆರ್. ಸೂರಯ್ಯ, ಸಂಚಾಲಕರಾದ ದಿನೇಶ್ ಮಾಡಿಪ್ಪಾಡಿ, ಕೋಶಾಧಿಕಾರಿಗಳಾದ ಕೆ. ಟಿ. ವಿಶ್ವನಾಥ ಜೊತೆ ಕಾರ್ಯದರ್ಶಿಯಾದ ಸುಪ್ರೀತ್ ಮೋoಟಡ್ಕ ಮೊದಲಾದವರು ಉಪಸ್ಥಿತರಿದ್ದರು.










