ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಜಮೀನು ಅತಿಕ್ರಮಣ

0

ನಿತಿನ್ ರಾಜ್ ಶೆಟ್ಟಿಯವರಿಂದ ಶಾಸಕರಿಗೆ, ತಹಶೀಲ್ದಾರ್, ದತ್ತಿ ಇಲಾಖೆಗೆ ಮನವಿ

ಪೆರುವಾಜೆ ಶ್ರೀ ಜಲದುರ್ಗಾದೇವಿ ಉದ್ಭವ ಜಮೀನು ದೇವರಮಾರು ಸರಕಾರಿ ಸ್ಥಳ ಸಂ. ನಂ. 98/2 ರಲ್ಲಿದ್ದು ಈ ಸ್ಥಳದಲ್ಲಿದ್ದ ಮರಗಳನ್ನು ನೆಲಸಮ ಮಾಡಿ ದೇವರ ಕಾಡನ್ನು ಇನ್ನಿಲ್ಲದಂತೆ ಮಾಡಿ ಸರಕಾರಿ ಸ್ಥಳ ಕಬಳಿಸಲು ಹುನ್ನಾರ ನಡೆಸಿರುವುದಾಗಿ ಸುಳ್ಯ ಶಾಸಕರಿಗೆ, ತಹಶೀಲ್ದಾರ್ ರಿಗೆ, ದತ್ತಿ ಇಲಾಖೆಯ ಸಹಾಯಕ ಆಯುಕ್ತರಿಗೆ ಹಾಗೂ ಆಡಳಿತಾಧಿಕಾರಿ ಅವರಿಗೆ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸಮಿತಿಯ ಸಂಚಾಲಕ ನಿತಿನ್ ರಾಜ್ ಶೆಟ್ಟಿ ಮತ್ತು ಸಹ ಸಂಚಾಲಕ ಅಂಗಾರ ಬಜ ಮನವಿ ಮಾಡಿದ್ದು ಈ ಆಕ್ರಮಣ ಮಾಡಿರುವವರ ಮೇಲೆ ಸೂಕ್ತ ಕ್ರಮ ಹಾಗೂ ಈ ಜಮೀನನ್ನು ದೇವರ ಹೆಸರಿಗೆ ಮೀಸಲಿಡಲು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದಾರೆ.
ಮನವಿಗೆ ಕಂದಾಯ ಇಲಾಖೆ ಸ್ಪಂದಿಸದೇ ಇದ್ದಲ್ಲಿ ದೇವಸ್ಥಾನದಿಂದ ಉದ್ಭವ ದೇವರಮಾರುವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಇದರ ಬಗ್ಗೆ ಶೀಘ್ರ ಭಕ್ತಾದಿಗಳ ಸಭೆ ನಡೆಸಿ ದಿನಾಂಕ ನಿಗದಿ ಗೊಳಿಸಲಾಗುವುದೆಂದು ನಿತಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.