ದೇಶದ ಸೈನ್ಯದ ಯಶಸ್ಸುಗೆ ಪ್ರಾರ್ಥನೆ ಸಲ್ಲಿಕೆ
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ. ಗುತ್ತಿಗಾರು ವತಿಯಿಂದ ದೇಶದ ಸೈನ್ಯದ ಯಶಸ್ಸುಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.















ಟ್ರಸ್ಟ್ ವತಿಯಿಂದ ನಡೆಸಲ್ಪಡುವ ಕರಾಟೆ ತರಬೇತಿ ಕಾರ್ಯಾಗಾರವನ್ನು ಪ. ವರ್ಗದ ಸಭಾ ಭವನ ಗುತ್ತಿಗಾರು ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ಧನಪತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯತ್ ಗುತ್ತಿಗಾರು, ಶ್ರೀಮತಿ ಪ್ರೀತಿ ನಿಶ್ಚಿತ್ ದೇವಶ್ಯ ಇವರುಗಳು ಜೊತೆಯಾಗಿ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ,ಮೋಹನ್ ಮುಕ್ಕೂರ್, ದಿವ್ಯಾ ಸುಜನ್ ಗುಡ್ಡೆಮನೆ, ಸುಕೇಶ್ ಚಾರ್ಮಾತ, ಶ್ರೀಮತಿ ಅಭಿಲಾಶಾ ಶಿವಪ್ರಕಾಶ್, ಕರಾಟೆ ಶಿಕ್ಷಕ ನಾರಾಯಣ ಮಳಿ, ಚೆಸ್ ಶಿಕ್ಷಕ ರಮೇಶ್ ಕರಂಗಲಡ್ಕ ಮತ್ತು ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚೆಸ್ ತರಬೇತಿ ಯ ಸಮಾರೋಪ, ಚೆಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು.ಮೇ 20ರ ವರೆಗೆ ಕರಾಟೆ ತರಬೇತಿ ನಡೆಯಲಿದೆ. ಮುಂದೆ ಪ್ರತಿ ವಾರ ಕರಾಟೆ ತರಬೇತಿ ನಡೆಯಲಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಸದೃಢತೆ ಎಂಬ ಧ್ಯೆಯ ಇದಾಗಿದೆ.










